ಕುವೈತ್-ಮಂಗಳೂರು ನಡುವೆ ಜಜೀರಾ ಏರ್ವೇಸ್ ಹಾರಾಟ
ದಮಾಮ್ನಿಂದ ಹೊರಟು ಬಜಪೆಯ ಮಂಗಳೂರು ಅಂತರ ರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದ ಜಜೀರಾ ಏರ್ ವೇಸ್ನ ವಿಶೇಷ ವಿಮಾನದಲ್ಲಿ ಕುವೈತ್ನ 11 ಚಿಣ್ಣರು ಸೇರಿ 181 ಮಂದಿ ಪ್ರಯಾಣಿಸಿದರು.
ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಆರಂಭವಾದ ಬಳಿಕ ಕುವೈತ್ ಪ್ರಯಾಣಿಕರನ್ನು ಕರೆತಂದ ಮೊದಲ ವಿಮಾನ ಇದಾಗಿದೆ. ಕುವೈತ್ ಪ್ರಯಾಣಿಕರು ದಮಾಮ್ ವಿಮಾನ ನಿಲ್ದಾಣದವರೆಗೆ ಬಸ್ಸಿನಲ್ಲಿ ಪ್ರಯಾಣಿಸಿ, ಅಲ್ಲಿಂದ ವಿಮಾನದಲ್ಲಿ ಪ್ರಯಾಣ ಮುಂದುವರಿಸಿದ್ದರು.
ಬಜಪೆ ವಿಮಾನ ನಿಲ್ದಾಣದಲ್ಲಿ ಸಂಜೆ 4.25ಕ್ಕೆ ಇಳಿದ ವಿಶೇಷ ವಿಮಾನದಲ್ಲಿ ಪೈಲಟ್ ಜಿಮ್ಮಿ ಮೌಸ್ಸಾ ಸಹಿತ ನಾಲ್ವರು ಸಿಬ್ಬಂದಿ ಇದ್ದರು. ಬಜಪೆಯಿಂದ ದಮಾಮ್ಗೆ ಸಂಜೆ 6.10ಕ್ಕೆ ಮರಳಿದ ಈ ವಿಮಾನದಲ್ಲಿ ಒಂದು ಶಿಶು ಸೇರಿ 151 ಪ್ರಯಾಣಿಸಿದರು. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲೀ ಜಜೀರಾ ಏರ್ವೇಸ್ ಕುವೈತ್ - ಮಂಗಳೂರು ನಡುವೆ ವಿಶೇಷ ವಿಮಾನ ಹಾರಾಟಕ್ಕೆ ವ್ಯವಸ್ಥೆ ಕಲ್ಪಿಸಿತ್ತು.
ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯು ದುಬೈ ಮತ್ತು ಅಬುಧಾಬಿಗೆ ಮಂಗಳೂರಿನಿಂದ ವಿಮಾನ ಹಾರಾಟ ನಡೆಸುತ್ತಿದೆ. ಶುಕ್ರವಾರವೂ ಈ ನಗರಗಳಿಗೆ ವಿಮಾನ ತೆರಳಲಿದೆ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.