ಭಾಗವತ ಮಾಧವ ಆಚಾರ್ಗೆ ಸಾರ್ವಜನಿಕ ಶ್ರದ್ಧಾಂಜಲಿ
ಮೂಡುಬಿದಿರೆ ಪರಿಸರದ ವಿವಿಧ ಯಕ್ಷಗಾನ ಸಂಘಟನೆಗಳಿಗೆ ಬೇಡಿಕೆಯ ಭಾಗವತರಾಗಿ ಇತ್ತೀಚೆಗೆ ನಿಧನರಾದ ಸಂಪಿಗೆ ಮಾಧವ ಕುಮಾರ್ ಆಚಾರ್ ಅವರಿಗೆ ಇಲ್ಲಿನ ಪೊನ್ನೆಚಾರಿ ವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ಪಾವಂಜೆ ಮೇಳದ ಯಕ್ಷಗಾನ ಕಲಾವಿದ ದಿನೇಶ್ ಕಾವಳಕಟ್ಟೆ ನುಡಿನಮನ ಸಲ್ಲಿಸಿ ಮಾಧವ ಆಚಾರ್ ಕೇವಲ ಭಾಗವತರಾಗಿರದೇ ಸರ್ವಶ್ರೇಷ್ಠ ಪ್ರೇಕ್ಷಕರೂ ಆಗಿದ್ದರು. ಉತ್ತಮ ಕಲಾಪೋಷಕರಾಗಿದ್ದು ಯಕ್ಷಗಾನ ಸಂಘಟನೆಗಳಿಗೆ ಬೆನ್ನೆಲುಬಾಗಿದ್ದರು ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ರಾಜಾರಾಮ್ ನಾಗರಕಟ್ಟೆ, ಹರಿಕಥಾ ಪ್ರವೀಣ ಚಂದ್ರಕಾಂತ್ ಭಟ್, ಜಿಂದಾಲ್ ಕಂಪೆನಿಯ ಉದ್ಯೋಗಿ ಈಶ್ವರ ಗೌಡ, ಕಲಾಪೋಷಕರಾದ ಕೃಷ್ಣಮೂರ್ತಿ ಮಾಯಣ, ಉದಯಕುಮಾರ್ ಮಾಳಿಗೆಮನೆ, ನಿವೃತ್ತ ಶಿಕ್ಷಕ ಶ್ಯಾಮ್ಸುಂದರ್ ನುಡಿನಮನ ಸಲ್ಲಿಸಿ ಅವರ ಕಲಾಸೇವೆಯನ್ನು ಸ್ಮರಿಸಿದರು.
ಪತ್ನಿ ಸುಧಾ ಎಂ.ಕೆ., ಪುತ್ರರಾದ ಕಿರಣ್ ಕುಮಾರ್, ಪವನ್ ಕುಮಾರ್ ಉಪಸ್ಥಿತರಿದ್ದರು. ಯಕ್ಷ ಮೇನಕಾದ ಸದಾಶಿವರಾವ್ ನೆಲ್ಲಿಮಾರ್ ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ್ ಶರ್ಮ ವಂದಿಸಿದರು.