ಬಂಟಕಲ್ಲು ಪೊದಮಲೆ ಸಮೀಪ ಬೆಂಕಿ ಆಕಸ್ಮಿಕ, ಮರಗಿಡಗಳು ಬೆಂಕಿಗಾಹುತಿ, ಆಗ್ನಿಶಾಮಕದಳದಿಂದ ಬೆಂಕಿ ಹತೋಟಿಗೆ
ಈ ಸಂದರ್ಭದಲ್ಲಿ ಬಂಟಕಲ್ಲು ನಾಗರಿಕ ಸಮಿತಿಯ ಸದಸ್ಯರು, ರಾಘವೇಂದ್ರ ನಾಯಕ್, ಪಾಲಮೆ, ಉಮೇಶ್ ರಾವ್, ಜಗದೀಶ ಆಚಾರ್ಯ, ವಿರೇಂದ್ರ ಪಾಟ್ಕರ್, ಸಂಜಯ್ ನಾಯಕ್, ಕೃಷ್ಣಮುರ್ತಿ ಪಾಟ್ಕರ್ ಸಹಿತ ಸ್ಥಳೀಯರು ಬೆಂಕಿ ಆರಿಸುವಲ್ಲಿ ಸಹಕರಿಸಿದರು.
ಇಂತಹ ಆಕಸ್ಮಿಕಗಳು ನಡೆದಾಗ ಮೊದಲು ಅಪವಾದಕ್ಕೆ ಗುರಿಯಾಗುವುದು ಮೆಸ್ಕಾಂ ಇಲಾಖೆ. ಇಲಾಖಾ ಸಿಬ್ಬಂಧಿಗಳು ವಿದ್ಯುತ್ ತಂತಿಗಳು ಹಾದು ಹೋಗುವ ಭಾಗದಲ್ಲಿರುವ ಗಿಡಮರಗಳ ಗೆಲ್ಲುಗಳನ್ನು ಕಡಿಯಲು ಹೋದಾಗ ಜಾಗದವರೇ ತಕರಾರು ತೆಗೆದು ತಡೆಯುತ್ತಾರೆ.
ವಿದ್ಯುತ್ ತಂತಿಗಳು ಹಾದುಹೋಗುವ ಅಡಿಭಾಗದಲ್ಲೇ ತೆಂಗಿನ ಸಸಿಗಳು, ಇನ್ನಿತರ ಗಿಡಗಳನ್ನು ನೆಡುತ್ತಾರೆ. ಗಾಳಿಗೆ ಒಣಗಿದ ತೆಂಗಿನ ಸೋಗೆಗಳು ವಿದ್ಯುತ್ ಪ್ರವಹಿಸುತ್ತಿರುವ ತಂತಿಗಳ ಮೇಲೆ ಬಿದ್ದಾಗ ಶಾರ್ಟ್ಸರ್ಕಿಟ್ ಉಂಟಾಗಿ ಕಿಡಿಗಳು ನೆಲಕ್ಕೆ ಬಿದ್ದಾಗ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಮೊದಲೇ ಸಿಬ್ಬಂದಿಗಳ ಕೊರತೆ ಇದೆ. ಇಲಾಖೆಯೊಂದಿಗೆ ಸ್ಥಳೀಯರೂ ಸಹಕರಿಸಬೇಕಾಗಿದೆ. ತಂತಿಗಳು ಹಾದು ಹೋಗುವಲ್ಲಿ ಗಿಡ, ಮರಗಿಡಗಳನ್ನು ಬೆಳೆಸಬಾರದು. ಇದ್ದಲ್ಲಿ ಗೆಲ್ಲುಗಳನ್ನು ಕತ್ತರಿಸಲು ಇಲಾಖಾ ಸಿಬ್ಬಂಧಿಗಳಿಗೆ ಅವಕಾಶ ಮಾಡಿ ಕೊಡಬೇಕು. ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳೂ ಈ ನಿಟ್ಟಿನಲ್ಲಿ ಸಹಕರಿಸಬೇಕು ಎನ್ನುತ್ತಾರೆ ಮೆಸ್ಕಾಂ ಶಿರ್ವ ಸೆಕ್ಷನ್ ಆಫೀಸರ್ ಮಂಜಪ್ಪ.
