ಇಬ್ಬರು ಬಾಲಕಿಯರು ನಾಪತ್ತೆ
Sunday, June 14, 2026
ಮಂಜೇಶ್ವರ: ವರ್ಕಾಡಿ ನೀರೊಳಿಗೆಯಲ್ಲಿನ ಶ್ರೀಮಾತಾ ಬಾಲಿಕಾಶ್ರಮ ಟ್ರಸ್ಟ್ನ ಹಾಸ್ಟೆಲ್ನಿಂದ ಇಬ್ಬರು ಬಾಲಕಿಯರು ನಾಪತ್ತೆಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಉರ್ಡೂರು ಮಣಿಯೂರಿನ ಅಮೃತಾ (15) ಮತ್ತು ಕಾಸರಗೋಡು ಕೇಳುಗುಡ್ಡೆಯ ಕೆ.ಸಿ ಅನನ್ಯಾ (14) ನಾಪತ್ತೆಯಾದವರು.
ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದ್ದು, ಸಂಜೆ ಏಳು ಗಂಟೆ ಬಳಿಕ ಇಬ್ಬರೂ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಬಾಲಕಿಯರ ಬಗ್ಗೆ ಮಾಹಿತಿ ಲಭಿಸಿದ್ದಲ್ಲಿ ಮಂಜೇಶ್ವರ ಠಾಣೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.