ಜಿಲ್ಲಾ ಕಂಬಳ ಸಮಿತಿ ಮಹಾಸಭೆ: 2026-27ನೇ ಕಂಬಳ ವೇಳಾಪಟ್ಟಿ ಬಿಡುಗಡೆ
ಕರಾವಳಿ ಭಾಗದ ಸಂಸ್ಕೃತಿಯನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಕಂಬಳವನ್ನು ಪ್ರವಾಸೋದ್ಯಮದ ಬ್ರ್ಯಾಂಡ್ ಆಗಿ ಬೆಳೆಸುವ ಯೋಜನೆ ರೂಪಿಸಲಾಗುತ್ತಿದೆ. ಮರವಂತೆ ಬೀಚ್, ಕಾಪು ಮತ್ತು ತಣ್ಣೀರುಬಾವಿ ಪ್ರದೇಶಗಳಲ್ಲಿ ಕಂಬಳ ಲಾಂಛನ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷದಿಂದ ಕಂಬಳಕ್ಕೆ ವಾರ್ಷಿಕ 5 ಕೋಟಿ ರೂ. ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.
ಈ ಬಾರಿ ಡಿಸೆಂಬರ್ 26ರಂದು ಸಾಂಪ್ರದಾಯಿಕ ಕಂಬಳ ನಡೆಯಲಿದ್ದು, ಹರೇಕಳ, ಸಾಣೂರು ಹಾಗೂ ಬಡಗಬೆಟ್ಟು ಕಂಬಳಗಳ ಆಯೋಜನೆಗೂ ಸಿದ್ಧತೆ ನಡೆದಿದೆ. ಪಿಲಿಕುಳ ಕಂಬಳಕ್ಕೆ ಸಂಬಂಧಿಸಿದ ನ್ಯಾಯಾಲಯದ ವ್ಯಾಜ್ಯದ ಕುರಿತು ಶೀಘ್ರದಲ್ಲೇ ಸ್ಪಷ್ಟ ಆದೇಶ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಕಂಬಳ ಸಮಿತಿಯಿಂದ ನಡೆದ ಕೆಲವೊಂದು ಲೋಪದೋಷಗಳ ಬಗ್ಗೆ ಹೊಕ್ಕಾಡಿಗೋಳಿ ಕಂಬಳದ ಸಂಘಟಕ ರಶ್ಮಿತ್ ಶೆಟ್ಟಿ ಅವರು ಪ್ರಶ್ನಿಸಿದರು.
ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು ಕಲ್ಕುಡೆ ಸಭೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ತೀರ್ಪುಗಾರರ ಸಂಚಾಲಕ ವಿಜಯಕುಮಾರ್ ಕಂಗಿನಮನೆ, ಗೌರವಾಧ್ಯಕ್ಷ ರೋಹಿತ್ ಹೆಗ್ಡೆ, ಉಪಾಧ್ಯಕ್ಷ ಶ್ರೀಕಾಂತ್ ಭಟ್, ಗೌರವ ಸಲಹೆಗಾರ ಶಾಂತರಾಮ್ ಶೆಟ್ಟಿ, ಉಪ್ಪಿನಂಗಡಿ ಕಂಬಳದ ಸ್ಥಾಪಕ ಅಧ್ಯಕ್ಷ ಉಮೇಶ್ ಶಣೈ ಸೇರಿದಂತೆ ವಿವಿಧ ಕಂಬಳ ಸಮಿತಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
2026-27ನೇ ಸಾಲಿನ ಕಂಬಳ ವೇಳಾಪಟ್ಟಿ:
ಅಕ್ಟೋಬರ್ 17- ಮೈಸೂರು
ನವೆಂಬರ್ 14 – ಪಣಪಿಲ
ನವೆಂಬರ್ 21 – ಕೊಡಂಗೆ
ನವೆಂಬರ್ 28 – ಕಕ್ಕೆಪದವು
ಡಿಸೆಂಬರ್ 5 – ಹೊಕ್ಕಾಡಿ
ಡಿಸೆಂಬರ್ 6 – ಬಳ್ಳಮಂಜ
ಡಿಸೆಂಬರ್ 12 – ಬಾರಾಡಿ
ಡಿಸೆಂಬರ್ 19 – ಮಂಗಳೂರು
ಡಿಸೆಂಬರ್ 26 – ಮೂಲ್ಕಿ
ಜನವರಿ 2 – ಮಿಯ್ಯಾರು
ಜನವರಿ 9 – ನರಿಂಗಾನ
ಜನವರಿ 16 – ಅಡ್ವೆ
ಜನವರಿ 23 – ಮೂಡುಬಿದಿರೆ
ಜನವರಿ 30 – ಐಕಳ
ಫೆಬ್ರವರಿ 6 – ಪುತ್ತೂರು
ಫೆಬ್ರವರಿ 13 – ಜಪ್ಪಿನಮೊಗರು
ಫೆಬ್ರವರಿ 20 – ವಾಮಂಜೂರ್
ಫೆಬ್ರವರಿ 27 – ಎರ್ಮಾಳ್
ಮಾರ್ಚ್ 6 – ಬಂಟ್ವಾಳ
ಮಾರ್ಚ್ 13 – ಬಂಗಾಡಿ
ಮಾರ್ಚ್ 20 – ವೇಣೂರು
ಮಾರ್ಚ್ 27 – ಉಪ್ಪಿನಂಗಡಿ
ಏಪ್ರಿಲ್ 3 – ಗುರುಪುರ
ಏಪ್ರಿಲ್ 10 – ಬಳ್ಕುಂಜೆ
ಏಪ್ರಿಲ್ 17 – ಹರೇಕಳ
ಏಪ್ರಿಲ್ 24 – ಬಡಗಬೆಟ್ಟು
( ಸಾಣೂರು, ಕಡಂದಲೆ, ಸಸಿಹಿತ್ಲು, ಬೈಂದೂರು, ಶಿರ್ವ ಕಂಬಳಗಳಿಗೆ ಇನ್ನು ದಿನ ನಿಗದಿಯಾಗಬೇಕಾಗಿದೆ)

