ಪುತ್ತಿಗೆ-ಗುಂಡ್ಯಡ್ಕದಲ್ಲಿ ರಸ್ತೆ ಕಾಮಗಾರಿ: ನೀರಿನ ಸಂಪಕ೯ದ ಪೈಪ್ ಗಳು ರಸ್ತೆ ಮೇಲೆ, ಸಾವ೯ಜನಿಕರಿಗೆ ನೀರಿನ ತೊಂದರೆ
ಈ ಸಮಸ್ಯೆಯ ಬಗ್ಗೆ ಸಮಾಜ ಸೇವಕ ವಾಸುದೇವ ನಾಯಕ್ ಅವರು ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಾಗ ನೀರಿನ ಪೈಪ್ ಗಳನ್ನು ಮೇಲಕ್ಕೆ ತೆಗೆದು ಹಾಕಲಾಗಿದೆ ಇದರಿಂದಾಗಿ ವಾಹನಗಳು ಅದರ ಮೇಲ್ಗಡೆ ಸಂಚರಿಸುವಾಗ ಪೈಪ್ ಗಳು ಒಡೆದು ಹೋಗುವ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ 50ಕ್ಕೂ ಅಧಿಕ ಮನೆಗಳಿದ್ದು ಅವರಿಗೆ ನೀರಿನ ಸಮಸ್ಯೆ ಕಾಡಲಿದೆ.
ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ 1ನೇ ವಾಡಿ೯ನಲ್ಲಿ ಪಿಡಬ್ಲ್ಯೂಡಿ ಇಲಾಖೆಯವರು ರಸ್ತೆ ಕಾಮಗಾರಿ ನಡೆಸುವಾಗ ಪಂಚಾಯತ್ ನ ನೀರಿನ ಸಂಪಕ೯ದ ಪೈಪ್ ಗಳು ಒಡೆದು ಹೋಗಿದೆ. ಪಂಚಾಯತ್ ನಿಂದ ನಿರಾಪೇಕ್ಷಣಾ ಪತ್ರವನ್ನು ಪಡೆದುಕೊಳ್ಳದೆಯೆ ಇಲಾಖೆಯವರು ಕಾಮಗಾರಿಯನ್ನು ಆರಂಭಿಸಿದ್ದಾರೆ.
ಆದರೆ ಸರಿಯಾಗಿ ಹೊಂಡ ತೆಗೆಯದೆ ಮತ್ತು ಆರು ಕೆ. ಜಿ ತೂಕದ ಪೈಪ್ ಅಳವಡಿಸುವ ಬದಲು ನಾಲ್ಕು ಕೆ. ಜಿ. ನ ಪೈಪ್ ಗಳನ್ನು ಅಳವಡಿಸಲಾಗಿದ್ದು ವಾಹನಗಳು ಸಂಚರಿಸುವಾಗ ಪೈಪ್ ಗಳು ಒಡೆದು ಹೋಗುವ ಸಾಧ್ಯತೆಯಿದೆ ಈ ಆದರಿಂದ ಪಿಡಬ್ಲ್ಯೂಡಿ ಇಲಾಖೆಯವರು ಕಾಮಗಾರಿಯನ್ನು ಸರಿಯಾಗಿ ಮಾಡಿ ಜನರ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ- ವಾಸುದೇವ ನಾಯಕ್ (ಅಕ್ರಮ ಸಕ್ರಮ ಸಮಿತಿಯ ಸದಸ್ಯ)
