ಮುಹಮ್ಮದ್ ನಬಿಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1501ನೇ ಮೀಲಾದುನ್ನಬೀ (ಸ) ಪ್ರಯುಕ್ತ ಮೀಲಾದ್ ರ್ಯಾಲಿ

ಮುಹಮ್ಮದ್ ನಬಿಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1501ನೇ ಮೀಲಾದುನ್ನಬೀ (ಸ) ಪ್ರಯುಕ್ತ ಮೀಲಾದ್ ರ್ಯಾಲಿ


ಮಂಗಳೂರು: ಬಜಾಲ್ ನಂತೂರು ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಮತ್ತು ಫೈಸಲ್ ನಗರ ನಮಾಉಲ್ ಇಸ್ಲಾಂ ಮದ್ರಸ ಹಾಗೂ ಶಾಂತಿನಗರ ತರ್ಬಿಯತುಲ್ ಇಸ್ಲಾಂ ಕಮಿಟಿ ಇವುಗಳ ಜಂಟಿ ಆಶ್ರಯದಲ್ಲಿ ಮೀಲಾದ್ ರ್ಯಾಲಿ ನಡೆಯಿತು.


ಬದ್ರಿಯಾ ಜುಮಾ ಮಸೀದಿ ಖತೀಬರಾದ ಅಬ್ದುಲ್ ನಾಸಿರ್ ಸಅದಿಯವರು ದುಆ ಮಾಡಿ, ಅಧ್ಯಕ್ಷ ಅಬ್ದುಲ್ ರವೂಫ್ ಅವರು ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಸದರ್ ಉಸ್ತಾದ್ ಅಬ್ದುಲ್ ಹಕೀಂ ಮದನಿ ಗೌಸಿಯಾ ಜುಮಾ ಮಸೀದಿ ಖತೀಬರಾದ ಇಕ್ಬಾಲ್ ನಿಝಾಮಿ ತರ್ಬಿಯತುಲ್ ಇಸ್ಲಾಂ ಕಮಿಟಿ ಇಮಾಮರಾದ ಮಿಖ್ದಾದ್ ಹಾಶಿಮಿ ಹಾಗೂ ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಉಪಾಧ್ಯಕ್ಷರಾದ ಅಶ್ರಫ್ ಕರಿಬೊಟ್ಪು ಹನೀಫ್ ಹಾಜಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಾಜಿ ಕಾರ್ಯದರ್ಶಿ ಪೊಡಿಯಾಕ ಕೋಶಾಧಿಕಾರಿ ನಝೀರ್ ಪಾಂಡೇಲ್ ಉಸ್ತುವಾರಕರಾದ ನಝೀರ್ ಬಜಾಲ್ ಅಶ್ರಫ್ ತೋಟ ಗೌಸಿಯಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ  ಬದ್ರಿಯಾ ಜುಮಾ ಮಸೀದಿ ಜೊತೆ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಕೆಳಗಿನ ಮನೆ ಸದಸ್ಯರಾದ ಇಕ್ಬಾಲ್ ಅಹ್ಸನಿ ಯೂಸುಫ್ ಕುಂಬ್ಳಲಿಕೆ ಹಾಗೂ ಮದ್ರಸಾ ಅಧ್ಯಕ್ಷರು ಮತ್ತು ಊರಿನ ಹಿರಿಯರೂ ಹಾಜರಿದ್ದರು.


ಪ್ರಸ್ತುತ ರ್ಯಾಲಿಯಲ್ಲಿ ದಫ್ ಸ್ಕೌಟ್ ಮತ್ತು ಫ್ಲವರ್ ಶೋ ಪ್ರದರ್ಶನ ಮತ್ತು ಸಿಹಿ ತಿಂಡಿ ತಂಪು ಪಾನೀಯ ನೀಡಲಾಯಿತು ರ್ಯಾಲಿಯು ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ವಠಾರ ದಿಂದ ಪ್ರಾರಂಭಿಸಿದ ರ್ಯಾಲಿಯು ಫೈಸಲ್ ನಗರ ಶಾಂತಿನಗರ ಪಾಂಡೇಲ್ ಮಾರ್ಗ ವಾಗಿ ರ್ಯಾಲಿ ನಡೆಯಿತು ರ್ಯಾಲಿಯ ಕೊನೆಯಲ್ಲಿ ದುಆ ದೊಂದಿಗೆ ವಿರಾಮ ನೀಡಲಾಯಿತು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article