ಎಸ್‌ಸಿಎಸ್ ಆಸ್ಪತ್ರೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಎಸ್‌ಸಿಎಸ್ ಆಸ್ಪತ್ರೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ


ಮಂಗಳೂರು: ಎಸ್‌ಸಿಎಸ್ ಆಸ್ಪತ್ರೆಯಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿಯ ಭಾವನೆಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವು ಕ್ಲಿನಿಕಲ್ ಫಾರ್ಮಸಿಸ್ಟ್ ಪ್ರತೀಕ್ಷಾ ಅಮೀನ್ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಸ್‌ಸಿಎಸ್‌ನ ವೈದ್ಯರಾದ ಡಾ. ರೋಹಿತ್ ಪಿಂಟೋ, ಉಪಸ್ಥಿತರಿದ್ದರು. 


ಕಾಲೇಜಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಜೀವ್ರಾಜ್ ಸೊರಕೆ, ವೈದ್ಯಕೀಯ ಅಧೀಕ್ಷಕ ಡಾ. ಶಾಲಿನಿ ಎಸ್. ರಾವ್, ಕನ್ಸಲ್ಟೆಂಟ್ ಎಮರ್ಜೆನ್ಸಿ, ಜನರಲ್ ಮ್ಯಾನೇಜರ್ ರಘುವೇಂದ್ರ ಸಿಂಗ್ ಹಾಗೂ ನರ್ಸಿಂಗ್ ಅಧೀಕ್ಷಕಿ ಗ್ರೇಸೆಮ್ಮಾ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಡಾ. ರೋಹಿತ್ ಪಿಂಟೋ ಅವರು, ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಪ್ರೇರಣಾದಾಯಕ ಕವನ `Where the Mind is Without Fear' (ಭಯವಿಲ್ಲದ ಮನಸ್ಸು) ಅನ್ನು ಉಲ್ಲೇಖಿಸಿದರು. ಜ್ಞಾನವು ಮುಕ್ತವಾಗಿರಬೇಕು, ಸತ್ಯಕ್ಕೆ ಮಹತ್ವ ಇರಬೇಕು ಹಾಗೂ ಪ್ರತಿಯೊಬ್ಬರೂ ಶ್ರೇಷ್ಠತೆಯತ್ತ ನಿರಂತರವಾಗಿ ಪ್ರಯತ್ನಿಸಬೇಕು ಎಂಬ ಸ್ವತಂತ್ರ ಭಾರತದ ದೃಷ್ಟಿಕೋನವನ್ನು ಅವರು ಕವನದ ಮೂಲಕ ವಿವರಿಸಿದರು. ಸ್ವಾತಂತ್ರ್ಯ, ಏಕತೆ, ವಿವೇಚನೆ ಮತ್ತು ನಿರಂತರ ಪ್ರಗತಿಯ ಸಂದೇಶವು ನೆರೆದಿದ್ದವರ ಮನಮುಟ್ಟಿತು.

ಎಸ್‌ಸಿಎಸ್ ಆಸ್ಪತ್ರೆಯ ಸಂಪೂರ್ಣ ಕುಟುಂಬವು ದೇಶಭಕ್ತಿ, ಏಕತೆ ಮತ್ತು ರಾಷ್ಟ್ರೀಯ ಹೆಮ್ಮೆಯ ಭಾವನೆಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿತು. ಎಲ್ಲಾ ಆಸ್ಪತ್ರೆ ಸಿಬ್ಬಂದಿಯ ಸಕ್ರಿಯ ಭಾಗವಹಿಸುವಿಕೆ ಕಾರ್ಯಕ್ರಮದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿತು. ಸಮಾಜಕ್ಕೆ ಸಮರ್ಪಣೆ, ಕಾಳಜಿ ಮತ್ತು ಶ್ರೇಷ್ಠತೆಯೊಂದಿಗೆ ಸೇವೆ ಸಲ್ಲಿಸುವ ತಮ್ಮ ಬದ್ಧತೆಯನ್ನು ಸಿಬ್ಬಂದಿಗಳು ತಿಳಿಸಿದರು.

ಲಕ್ಷ್ಮೀ ನರಸಿಂಹ ಭಟ್ ವಂದಿಸಿದರು. ಬಳಿಕ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಅಧ್ಯಕ್ಷ ಡಾ. ಜೀವ್ರಾಜ್ ಸೊರಕೆ ಅವರು ಡಾ. ರೋಹಿತ್ ಪಿಂಟೋ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article