ಮೂಡುಬಿದಿರೆ ಆಡಳಿತ ಸೌಧಕ್ಕೆ ಲೋಕಾಯುಕ್ತರ "ಸರ್ಪ್ರೈಸ್ ವಿಸಿಟ್"
Tuesday, August 11, 2026
ಮೂಡುಬಿದಿರೆ: ಇಲ್ಲಿನ ತಾಲೂಕು ಆಡಳಿತ ಸೌಧಕ್ಕೆ ಕಾರಾವಾರದ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ "ಸರ್ಪ್ರೈಸ್ ವಿಸಿಟ್" ನೀಡಿ ಮೂಲಭೂತ ಸೌಕಯ೯ಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳಿಗೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ "ಸರ್ಪ್ರೈಸ್ ವಿಸಿಟ್" ನೀಡಲು ಸೂಚನೆಯಿದ್ದು ಅದರಂತೆ ಕಾರಾವಾರದ ಲೋಕಾಯುಕ್ತ ಎಸ್. ಪಿ ಧನ್ಯಾ ನಾಯಕ್ ಅವರು ಮೂಡುಬಿದಿರೆಯ ಆಡಳಿತ ಸೌಧಕ್ಕೆ ಭೇಟಿ ನೀಡಿ ಕಛೇರಿಯಲ್ಲಿ ಸಿಬಂದಿಗಳ ಕೊರತೆ, ಮೂಲಭೂತ ಸೌಕಯ೯ಗಳ ಕೊರತೆ ಹಾಗೂ ಸಾವ೯ಜನಿಕರ ಕಡತಗಳ ವಿಲೇವಾರಿ ವಿಳಂಬದ ಬಗ್ಗೆ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಕೊರತೆಗಳು ಕಂಡು ಬಂದಿಲ್ಲದ ಹಿನ್ನೆಲೆಯಲ್ಲಿ ಹಿಂತಿರುಗಿದ್ದಾರೆ.