ತಲಪಾಡಿ: ಕಾರು ಢಿಕ್ಕಿ-ಪಾದಚಾರಿ ಗಂಭೀರ
Tuesday, August 11, 2026
ಉಳ್ಳಾಲ: ಪಾದಚಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡ ಘಟನೆ ತಲಪಾಡಿಯಲ್ಲಿ ಸೋಮವಾರ ಸಂಜೆ ವೇಳೆ ಸಂಭವಿಸಿದೆ.
ಗದಗ ನಿವಾಸಿ ಶರಣಪ್ಪ (50) ಗಂಭೀರ ಗಾಯಗೊಂಡವರು . ರಸ್ತೆ ಬದಿಯಲ್ಲಿ ನಿಂತಿದ್ದ ಅವರಿಗೆ ಕೇರಳ ನೋಂದಾಯಿತ ಕಾರು ಚಾಲಕ ಅಜಾಗರೂಕತೆಯಿಂದ ಢಿಕ್ಕಿ ಹೊಡೆದಿದೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.