ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಎಫ್.ಐ.ಆರ್. ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕೀಯ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಮಾತನಾಡಿ, ಬಿಜೆಪಿ ಸರ್ಕಾ ತನ್ನ ವೈಫಲ್ಯಗಳನ್ನು ಮರೆಮಾಚಲು ಹಾಗೂ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ದ್ವೇಷದ ರಾಜಕಾರಣಕ್ಕೆ ಮೊರೆ ಹೋಗುತ್ತಿದೆ. ಬಿಜೆಪಿ ನಾಯಕರು ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮೂಡಿಸುವ ಪ್ರಯತ್ನ ಮಾಡುತ್ತಿರುವುದು ಅತ್ಯಂತ ಅಪಾಯಕಾರಿ. ವಿರೋಧ ಪಕ್ಷದ ನಾಯಕರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಧ್ವನಿ ಅಡಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷ ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಹೇಳಿದರು.
ಈ ಸಂದರ್ಭ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ ಮಾತನಾಡಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಶಶಿಧರ್ ಹೆಗ್ಡೆ, ಶಾಲೆಟ್ ಪಿಂಟೋ, ಸಂತೋಷ್ ಕುಮಾರ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ಮೋಹನ್ ಕೋಟ್ಯಾನ್ ಮುಲ್ಕಿ, ಭರತ್ ಮುಂಡೋಡಿ, ಸುರೇಂದ್ರ ಕಂಬಳಿ, ಪದ್ಮನಾಭ ಕೋಟ್ಯಾನ್, ಕೆ.ಪಿ.ಥೋಮಸ್, ಕೆ.ಹರಿನಾಥ್ ಜೋಗಿ, ಶಾಹುಲ್ ಹಮೀದ್, ನೀರಜ್ ಚಂದ್ರಪಾಲ್, ಜೋಕಿಂ ಡಿಸೋಜಾ, ನವೀನ್ ಡಿಸೋಜಾ, ಲುಕ್ಮಾನ್ ಬಂಟ್ವಾಳ, ಲಾರೆನ್ಸ್ ಡಿಸೋಜಾ, ವಸಂತ್ ಬೆರ್ನಾಡ್, ಅಬೂಬಕ್ಕರ್ ಕುದ್ರೋಳಿ, ಪ್ರೇಮ್ ನಾಥ್ ಪಿ.ಬಿ, ದಿನೇಶ್ ಮುಳೂರು, ಲ್ಯಾನ್ಸಿ ಲೋಟೊ ಪಿಂಟೋ, ಮಲಾರ್ ಮೋನು, ಅಬ್ಬಾಸ್ ಅಲಿ, ಟಿ.ಕೆ.ಸುಧೀರ್, ಗಿರೀಶ್ ಶೆಟ್ಟಿ, ಡೆನ್ನಿಸ್ ಡಿಸಿಲ್ವ, ಶುಭೋದಯ ಆಳ್ವ, ಸಂಶುದ್ದೀನ್ ಕುದ್ರೋಳಿ, ಮೆಲ್ವಿನ್ ಡಿಸೋಜಾ, ಶಬೀರ್.ಎಸ್, ಪದ್ಮನಾಭ ಅಮೀನ್, ಏರ್ ಪೋರ್ಟ್ ಖಾದರ್, ಎಂ.ಪಿ.ಮನುರಾಜ್, ಭಾಸ್ಕರ್ ರಾವ್, ರಮಾನಂದ ಪೂಜಾರಿ, ಸುಹಾನ್ ಆಳ್ವ, ಯು.ಟಿ. ಫರೀದ್ ಇಫ್ತಿಕರ್, ಗೀತಾ ಅತ್ತಾವರ, ಚಂದ್ರಕಲಾ ಜೋಗಿ, ಸಾರಿಕ ಪೂಜಾರಿ, ನೀತು ಡಿಸೋಜಾ, ಕವಿತಾ ವಾಸು, ಶಾಂತಲ ಗಟ್ಟಿ, ನ್ಯಾನ್ಸಿ ನೊರೋನ್ಹ, ಸೌಹನ್ ಎಸ್.ಕೆ, ಆಬಿದ್ ಅಲಿ ಕದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.


