Kasaragodu: ಹಿಟಾಚಿ ಬಿದ್ದು ಯುವಕ ಸಾವು

Kasaragodu: ಹಿಟಾಚಿ ಬಿದ್ದು ಯುವಕ ಸಾವು

ಕಾಸರಗೋಡು: ಹಿಟಾಚಿ ಯಂತ್ರವೊಂದು ಅಕಸ್ಮಾತ್ ಆಗಿ ಮಗುಚಿ ಮೈಮೇಲೆ ಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಇಂದು ಬೆಳಗ್ಗೆ ಬಂದಡ್ಕದಲ್ಲಿ ನಡೆದಿದೆ.

ಬಂದಡ್ಕ ನಿವಾಸಿ, ಮಹಿಳಾ ಕಾಂಗ್ರೆಸ್ ಕಾಸರಗೋಡು ಜಿಲ್ಲಾಧ್ಯಕ್ಷೆ ಮಿನಿ ಚಂದ್ರನ್ ಅವರ ಪುತ್ರ ಪ್ರೀತಂ ಲಾಲ್ ಚಂದ್(22) ಮೃತಪಟ್ಟ ಯುವಕ.

ಬಂದಡ್ಕ ಪಡುಪ್ಪುನಲ್ಲಿರುವ ಸಂಬಂಧಿಕರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಮನೆಯಂಗಳದಲ್ಲಿ ಹಿಟಾಚಿ ಯಂತ್ರವನ್ನು ತೊಳೆಯುತ್ತಿದ್ದಾಗ ಆಕಸ್ಮಿಕವಾಗಿ ಮಗುಚಿ ಬಿದ್ದಿದೆ. ಈ ವೇಳೆ ಲಾಲ್ ಚಂದ್ ಅದರಡಿಗೆ ಸಿಲುಕಿದ್ದಾರೆನ್ನಲಾಗಿದೆ.  ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದರು. 

ಪ್ರೀತಂ ಲಾಲ್ ಚಂದ್ ತನ್ನ ಸಹೋದರ ಗೌತಮ್ ಲಾಲ್ ಅವರ ಹಿಟಾಚಿ ಯಂತ್ರದ ಕೆಲಸದಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.  ಬೇಡಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article