.jpg)
Mangalore: ತಮಿಳುನಾಡು ಬಿಎಸ್ಪಿ ಅಧ್ಯಕ್ಷರ ಕೊಲೆಗೆ ದ.ಕ. ಬಿಎಸ್ಪಿ ಖಂಡನೆ
Monday, July 8, 2024
ಮಂಗಳೂರು: ತಮಿಳುನಾಡು ರಾಜ್ಯ ಬಹುಜನ ಸಮಾಜ ಪಕ್ಷದ ಅಧ್ಯಕ್ಷರಾಗಿದ್ದ ಕೆ. ಆರ್ಮ್ ಸ್ಟ್ರಾಂಗ್ ಅವರ ಹತ್ಯೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಎಸ್ಪಿ ಖಂಡಿಸಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿದೆ.
ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ತಮಿಳುನಾಡು ಮುಖ್ಯಮಂತ್ರಿಯವರಿಗೆ ಮನವಿ ನೀಡಿರುವ ಜಿಲ್ಲಾ ಬಿಎಸ್ಪಿ ಮುಖಂಡರು ಆರ್ಮ್ ಸ್ಟ್ರಾಂಗ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದ್ದಾರೆ.
ಜುಲೈ 6ರಂದು ಚೆನ್ನೈಯಲ್ಲಿ ಆರ್ಮ್ ಸ್ಟ್ರಾಂಗ್ ಅವರ ಕೊಲೆ ಮಾಡಲಾಗಿತ್ತು.
ಬಿ.ಎಸ್.ಪಿ. ದ.ಕ. ಜಿಲ್ಲಾ ಅಧ್ಯಕ್ಷ ಗೋಪಾಲ ಮುತ್ತೂರು, ಬಿಎಸ್ಪಿ ಮುಖಂಡರಾದ ಕಾಂತಪ್ಪ ಅಲಂಗಾರ್, ದೇವಪ್ಪ ಬೋದ್, ಎಂ.ವಿ. ಪದ್ಮನಾಭ, ಲೋಕೇಶ್ ಮುತ್ತೂರು, ಪದ್ಮನಾಭ .ಕೆ ಹಾಗೂ ಕಿರಣ್ ಕುಮಾರ್ ಅವರು ಪ್ರಭಾರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಅವರ ಮೂಲಕ ಕೆ. ಆರ್ಮ್ ಸ್ಟ್ರಾಂಗ್ ಅವರ ಹತ್ಯೆ ತನಿಖೆಯನ್ನು ಸಿ.ಬಿ.ಐ.ಗೆ ಒಪ್ಪಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.