ಪುತ್ತಿಗೆ ದೇಗುಲ ಬ್ರಹ್ಮಕಲಶ: ಚಪ್ಪರ ಮುಹೂರ್ತ

ಪುತ್ತಿಗೆ ದೇಗುಲ ಬ್ರಹ್ಮಕಲಶ: ಚಪ್ಪರ ಮುಹೂರ್ತ


ಮೂಡುಬಿದಿರೆ: ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶಾಭಿಷೇಕ (ಫೆ.28-ಮಾ.7)ದ ಪೂರ್ವಭಾವಿಯಾಗಿ ಸೋಮವಾರ ಚಪ್ಪರ ಮುಹೂರ್ತ ನೆರವೇರಿಸಲಾಯಿತು.

ಎಡಪದವು ವೇ.ಮೂ. ಮುರಳೀಧರ ತಂತ್ರಿಯವರು ಮುಹೂರ್ತ ವಿಧಿಗಳನ್ನು ನಡೆಸಿಕೊಟ್ಟರು. ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತಸರ ಚೌಟರ ಅರಮನೆ ಕುಲದೀಪ ಎಂ., ಪ್ರಧಾನ ಅರ್ಚಕ ಅಡಿಗಳ್ ಅನಂತಕೃಷ್ಣ ಭಟ್, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ನೀಲೇಶ್ ಶೆಟ್ಟಿ ಕಾರ್ಯದರ್ಶಿ ವಿದ್ಯಾರಮೇಣ ಭಟ್, ಕೋಶಾಧಿಕಾರಿ ಕೆ. ಶ್ರೀಪತಿ ಭಟ್, ಕೊಡಿಪ್ಪಾಡಿ ಅಶೋಕ ಹೆಗ್ಡೆ ನಾರಾಯಣ ಉಪಾಧ್ಯಕ್ಷರಾದ ಕುಂಗೂರು ಶಿವಪ್ರಸಾದ್ ಪಿ.ಎಂ., ಸುದರ್ಶನ ಎಂ. ಸಹಿತ ಆಚಾರ್ಯ, ರಾಜೇಂದ್ರ ಕುಮಾರ್, ಪ್ರಮುಖರು, ಎಂ. ವೀರೇಂದ್ರ ಸಹಿತ ಬಾಹುಬಲಿ ಪ್ರಸಾದ್, ಸಂಚಾಲಕರಾದ ಚೌಟರ ಅರಮನೆ ಪರಿವಾರದವರು, ಹಂಡೇಲುಗುತ್ತು ಧನಕೀರ್ತಿ ಬಲಿಪ, ಭಕ್ತರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article