
ಏ.16-19: ‘ರಂಗೋತ್ಸವ’ ಮಕ್ಕಳ ಬೇಸಿಗೆ ಶಿಬಿರ-2025
ಮಂಗಳೂರು: ರಂಗ ಸ್ವರೂಪ(ರಿ) ಕುಂಜತ್ತಬೈಲ್, ಮಂಗಳೂರು ಇದರ ವತಿಯಿಂದ ‘ರಂಗೋತ್ಸವ’ ಮಕ್ಕಳ ಬೇಸಿಗೆ ಶಿಬಿರ-2025, ದ.ಕ. ಜಿ.ಪಂ.ಮಾ.ಹಿ.ಪ್ರಾ. ಶಾಲೆ, ಮರಕಡ, ಕುಂಜತ್ತಬೈಲ್ನಲ್ಲಿ ಎಪ್ರಿಲ್ 16 ರಿಂದ 19 ರ ವರೆಗೆ ಉಚಿತವಾಗಿ ಜರುಗಲಿದೆ.
ಶಿಬಿರದಲ್ಲಿ ಮಕ್ಕಳಿಗೆ ಗೋಡೆ ಪತ್ರಿಕೆ, ಹಾಡು, ಕ್ರಿಯಾತ್ಮಕ ಚಿತ್ರ, ರೇಖಾ ಚಿತ್ರ, ಮುಖವಾಡ ತಯಾರಿ, ನಾಟಕ, ಗೂಡುದೀಪ ರಚನೆ, ಯೋಗಾಸನ, ಕೊಲಾಜ್, ಮಿಮಿಕ್ರಿ, ಮೂಕಾಭಿನಯ, ಗಾಳಿಪಟ, ವ್ಯಂಗ್ಯಚಿತ್ರ, ಜನಪದ ನೃತ್ಯ, ಬಣ್ಣದ ಹೂ ತಯಾರಿ, ಆರೋಗ್ಯ ಅರಿವು, ಮನೋರಂಜನಾ ಆಟ, ಗೊಂಬೆ ತಯಾರಿ ಮುಂತಾದ ವಿಷಯ ಗಳಲ್ಲಿ ತರಬೇತಿ ನೀಡಲಿದ್ದಾರೆ.
ಸುಬ್ರಹ್ಮಣ್ಯ ಕಾಸರಗೋಡು, ಮತ್ತು ಝುಬೇರ್ ಖಾನ್ ಕುಡ್ಲ ಅವರ ನಿರ್ದೇಶನದಲ್ಲಿ ಜರಗುವ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಲಾನಿಧಿ ಗೋಪಾಡ್ಕರ್, ಪ್ರೇಂನಾಥ್ ಮರ್ಣೆ ದಿನೇಶ್ ಹೊಳ್ಳ, ತಸ್ಲಿಮಾ ಬಾನು, ವೈಷ್ಣವಿ ರಾಜೇಶ್, ಚಿತ್ರಶ್ರೀ, ತಾರನಾಥ ಕೈರಂಗಳ, ನವೀನ್ ಅಡ್ಕರ್, ಡಾ. ದೃತಿ ಆಳ್ವ, ಹುಸೈನ್ ರಿಯಾಜ್, ಹನಿಷ, ಜ್ಯೋತಿ ಸುಬ್ರಹ್ಮಣ್ಯ, ಜೆನಿಫರ್, ಜಯಲತಾ, ಕೆ. ಜಾನ್ವಿ ಮಾಲೆಮಾರ್, ಸುಮನಾ ರೆಬೆಲ್ಲೊ, ಸುನಿತಾ ಲೂವಿಸ್ ಮತ್ತು ರಂಗ ಸ್ವರೂಪ ತಂಡದ ಸದಸ್ಯರು ಭಾಗವಹಿಸಲಿರುವರು.
ಭಾಗವಹಿಸಿದ ಪ್ರತೀ ಶಿಬಿರಾರ್ಥಿಗಳಿಗೂ ಪ್ರಮಾಣಪತ್ರ ನೀಡಲಾಗುವುದು. ಸಮಾರೋಪ ಸಮಾರಂಭದಂದು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು, ಜಾನಪದ ವಿದ್ವಾಂಸರಾದ ಕೆ.ಕೆ. ಪೇಜಾವರ ಅವರಿಗೆ ‘ರಂಗ ಸ್ವರೂಪ ಪ್ರಶಸ್ತಿ-2025’ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.