ವಕ್ಫ ತಿದ್ದುಪಡಿ ಮಸೂದೆಯನ್ನು ಪಾಸ್ ಮಾಡಿದ ಕೇಂದ್ರದ ಮೋದಿ ಸರಕಾರಕ್ಕೆ ಅಭಿನಂದನೆ

ವಕ್ಫ ತಿದ್ದುಪಡಿ ಮಸೂದೆಯನ್ನು ಪಾಸ್ ಮಾಡಿದ ಕೇಂದ್ರದ ಮೋದಿ ಸರಕಾರಕ್ಕೆ ಅಭಿನಂದನೆ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಅಂತಿಮವಾಗಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕಾರ ಮಾಡಿದೆ. ಕೆಲವೇ ದಿನಗಳಲ್ಲಿ ಈ ಬಿಲ್ ಕಾನೂನು ರೂಪದಲ್ಲಿ ಬರಲಿದೆ. ವಿಪಕ್ಷಗಳು ಸುಳ್ಳು ಮಾಹಿತಿ ಕೊಟ್ಟು ಅಲ್ಪಸಂಖ್ಯಾತ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ವಿಫಲ ಆಗಿದೆ.

ಯಾವ ಸಮುದಾಯಕ್ಕೆ ಈ ವಕ್ಫ್ ತಿದ್ದುಪಡಿ ಮಸೂದೆಯಿಂದ ಅನ್ಯಾಯ ಆಗುತ್ತದೆ ಎನ್ನಲಾಗಿತ್ತೋ ಅದೇ ಸಮುದಾಯ ಸಂಭ್ರಮದಿಂದ ವಕ್ಫ್ ತಿದ್ದುಪಡಿ ಮಸೂದೆಯನ್ನು ಸ್ವಾಗತಿಸಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜೆಸ್ಸೆಲ್ ಡಿ’ಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಕ್ಫ್ ಎನ್ನುವುದು ಲ್ಯಾಂಡ್ ಜಿಹಾದ್ ಆಗಿ ಪರಿಣಮಿಸಿತ್ತು. ಇದರಿಂದ ಕೇವಲ ಸರ್ಕಾರದ ಭೂಮಿ, ಹಿಂದೂಗಳ ಭೂಮಿ ಅಷ್ಟೇ ಅಲ್ಲ. ಅಲ್ಪಸಂಖ್ಯಾತರಾದ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಬಡವರಿಗೆ ಸೇರಿದ ಜಾಗವನ್ನೂ ವಕ್ಫ್ ಅನ್ನೋ ಹೆಸರಲ್ಲಿ ಅತಿಕ್ರಮಣ ಮಾಡಲಾಗುತ್ತಿತ್ತು. ಅದಕ್ಕೆ ಕೇರಳದ ಮುನಂಬಂನ ಘಟನೆ ತಾಜಾ ಉದಾಹರಣೆ.

ಸುಮಾರು 600 ಕುಟುಂಬಗಳು 173 ದಿನಗಳಿಂದ ವಕ್ಫ್ ಕಬ್ಜಾ ಮಾಡಿಕೊಂಡಿದ್ದ ಜಮೀನಿಗಾಗಿ ಹೋರಾಡುತ್ತಿದ್ದು, ಮೋದಿ ಸರ್ಕಾರದ ಈ ನಿರ್ಧಾರದಿಂದ ತುಂಬಾನೆ ಖುಷಿಯಾಗಿ ಸಂಭ್ರಮಿಸುತ್ತಿದೆ. ಕ್ರಿಶ್ಚಿಯನ್ ಸಮುದಾಯ ಇವತ್ತು ಮೋದಿ ಅವರಿಗೆ ಧನ್ಯವಾದ ಹೇಳುತ್ತಿದೆ. ಇನ್ನೊಂದು ಕಡೆ ಬರೇಲಿಯಲ್ಲಿ ಮುಸ್ಲಿಂ ಜಮಾತ್ ಕೂಡ ಇದನ್ನು ಸ್ವಾಗತಿಸಿದ್ದು, ಬಡ ಮುಸ್ಲಿಮರಿಗೆ ಸಹಾಯ ಆಗಲಿದೆ ಅಂತ ಹೇಳಿದೆ.

ಈ ಎರಡು ಉದಾಹರಣೆಯಿಂದಲೇ ಅಲ್ಪಸಂಖ್ಯಾತ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ನರೇಂದ್ರ ಮೋದಿ ಅವರ ಸರ್ಕಾರ ಬಡವರ ಹಾಗೂ ನೊಂದವರ ಪರವಾಗಿರುವಂತಹ ಸರ್ಕಾರ. ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಎನ್ನುತ್ತಾ ಎಲ್ಲಾ ಸಮುದಾಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಹೆಮ್ಮೆಯ ಪ್ರಧಾನಿಗಳಿಗೆ ಬಿಜೆಪಿ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿಯಾಗಿ ಅಭಿನಂದನೆಯನ್ನು ಸಲ್ಲಿಸುತ್ತಾ. ಇಡೀ ಸಮುದಾಯದ ಪರವಾಗಿ ವಕ್ಫ್ ತಿದ್ದುಪಡಿ ಮಸೂದೆಯನ್ನು ನಾವು ಸಂತೋಷದಿಂದ ಸ್ವಾಗತಿಸುತ್ತೇವೆ ಎಂದು ಜೆಸ್ಸೆಲ್ ಡಿ’ಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article