ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಶಿಕ್ಷಣ-ಜೀವನ ಕಾರ್ಯಕ್ರಮ

ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಶಿಕ್ಷಣ-ಜೀವನ ಕಾರ್ಯಕ್ರಮ


ಮೂಡುಬಿದಿರೆ: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಮೃತ ಮಹೋತ್ಸವ ಸಂಭ್ರಮ 2025 ಪ್ರಯುಕ್ತ` ಗೆಲ್ಲೋಣ ಬನ್ನಿ-ಶಿಕ್ಷಣ ಮತ್ತು ಜೀವನ' ಕಾರ್ಯಕ್ರಮ ಅಮೃತ ಸಭಾಭವನದಲ್ಲಿ ನಡೆಯಿತು.
ಅಮೃತ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಸುದರ್ಶನ್ ಎಂ. ಕಾರ್ಯಕ್ರಮ ಉದ್ಘಾಟಿಸಿದರು. 
ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು. ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆವಹಿಸಿದರು. 
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ಸಮಾಜದ ಸುಮಾರು 76 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 
ಜಿಪಂ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಅಗ್ನಿ ಶಾಮಕದಳದ ಮಾಜಿ ಅಧಿಕಾರಿ ಯೋಗೇಶ್ ಪಿ.ಬಂಗೇರ, ಇನ್ನರ್‌ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಮೀನಾಕ್ಷಿ ನಾರಾಯಣ, ಸಂಘದ ಹಿರಿಯ ಸದಸ್ಯ ಪದ್ಮರಾಜ ಪೇರಿ, ಮಾಜಿ ಉಪಾಧ್ಯಕ್ಷ ತುಕರಾಮ ಬಂಗೇರ, ಸೇವಾದಳದ ಮಾಜಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಯೋಗಿತಾ ನವಾನಂದ ಉಪಸ್ಥಿತರಿದ್ದರು. 
ಸಂಘದ ಮಾಜಿ ಅಧ್ಯಕ್ಷರಾದ ಪಿ. ಕೆ. ರಾಜು ಪೂಜಾರಿ, ರವೀಂದ್ರ ಎಂ. ಸುವರ್ಣ, ನಿವೃತ್ತ ಸಹಾಯಕ ಆಯುಕ್ತ ಅಚ್ಚುತ ಪಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ, ಉದ್ಯಮಿ ನಾರಾಯಣ ಪಿ. ಎಂ., ಆರ್ಯಭಟ ಪ್ರಶಸ್ತಿ ಪುರಸ್ಕೃತ ಸತೀಶ್ ಬಂಗೇರ, ಸಂಘದ ಉಪಾಧ್ಯಕ್ಷ ಸುಶಾಂತ್ ಕರ್ಕೇರಾ, ಕೋಶಾಧಿಕಾರಿ ಜಗದೀಶ್ ಮಿಜಾರು, ಸದಸ್ಯರಾದ ನಾರಾಯಣ ಕೋಟ್ಯಾನ್, ಶ್ರೀ ನಾವಾನಂದ ಒಂಟಿಕಟ್ಟೆ, ಜೊತೆ ಕಾರ್ಯದರ್ಶಿ ಶಿವಾನಂದ ಅಂಚನ್, ನವೀನ್ ಪಿ. ಕುಂದರ್ ಉಪಸ್ಥಿತರಿದ್ದರು. 
ರೋಹನ್ ಅತಿಕಾರಬೆಟ್ಟು ಸ್ವಾಗತಿಸಿದರು. ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೇಲು, ಸಂಜಾತ ಕಾರ್ಯಕ್ರಮ ನಿರೂಪಿಸಿದರು.ಸಂಘದ ಉಪಾಧ್ಯಕ್ಷ ರವೀಂದ್ರ ಕರ್ಕೇರಾ ವಂದಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್, ಕೋಶಾಧಿಕಾರಿ ಸ್ಮಿತಾ ಭಾಸ್ಕರ್ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿವರ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article