
ರಾ.ಹೆ. ಅವೈಜ್ಞಾನಿಕ ಕಾಮಗಾರಿಗೆ ಬಲಿಯಾದ ಬೈಕ್ ಸವಾರನ ಮೇಲೆ ಕೇಸು ದಾಖಲು
Friday, June 6, 2025
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿಯ 169ರಲ್ಲಿ ಹಾದು ಹೋಗುವ ಮಿಜಾರಿನಲ್ಲಿ ಅವೈಜ್ಞಾನಿಕ ಕಾಮಗಾರಿಯ ಪರಿಣಾಮವಾಗಿ ಗುರುವಾರ ರಾತ್ರಿ ಹೊಂಡಕ್ಕೆ ಬಿದ್ದು ಬಲಿಯಾಗಿರುವ ಬೈಕ್ ಸವಾರನ ಮೇಲೆ ಮೂಡುಬಿದಿರೆ ಪೊಲೀಸರು ಕೇಸು ದಾಖಲಿಸಿದ ಘಟನೆ ನಡೆದಿದೆ.
ಮಿಜಾರಿನಲ್ಲಿ ರಾ.ಹೆ. ಕಾಮಗಾರಿಯು ಅಪೂಣ೯ ಸ್ಥಿತಿಯಲ್ಲಿದ್ದು ಅಲ್ಲಿ ಮೋರಿಯ ದೊಡ್ಡ ಚರಂಡಿಗೆ ಅಡ್ಡವಾಗಿ ಹೊಂಡ ತೋಡಿ ಅದಕ್ಕೆ ಕಾಂಕ್ರೀಟ್ ಬೆಡ್ಡಿಂಗ್ ಹಾಕಲಾಗಿದೆ ಹಾಗೂ 150 ಮೀ. ದೂರದಲ್ಲಿ ಎತ್ತರದಲ್ಲಿ ಸೂಚನಾ ಫಲಕವನ್ನು ಹಾಕಲಾಗಿದ್ದು ಇದು ಬೈಕ್ ಸವಾರರ ಗಮನಕ್ಕೆ ಬರುವುದಿಲ್ಲ ಆದರೂ ಪೊಲೀಸರು ಅವಘಡದಿಂದ ಮೃತಪಟ್ಟಿರುವ ಅಬ್ದುಲ್ ಖಾದರ್ ಅವರ ಮೇಲೆ ನಿಲ೯ಕ್ಷ್ಯದ ಚಾಲನೆ ಎಂದು ಪ್ರಕರಣ ದಾಖಲಿಸಿರುವ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿ ಘಟನೆ ನಂತರ ಡಿಬಿಎಲ್ ಅವರು ಸೂಚನಾ ಫಲಕವನ್ನು ಹಾಕಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.