
ಎದೆನೋವು ಕಾಣಿಸಿಕೊಂಡ ವ್ಯಕ್ತಿ ಸಾವು
Tuesday, July 1, 2025
ಬೆಳ್ತಂಗಡಿ: ಅರೋಗ್ಯವಾಗಿದ್ದ ವ್ಯಕ್ತಿಗೆ ಏಕಾಏಕಿ ಎದೆನೋವು ಕಾಣಿಸಿದ್ದು ಆಸ್ಪತ್ರೆಗೆ ಹೋದಾಗ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕಲ್ಲಾಜೆ ಗಂಪದಕೋಡಿ ನಿವಾಸಿ ವಜ್ರಾಕ್ಷ ಪೂಜಾರಿ (53) ಎಂಬವರಿಗೆ ಜೂ.30 ರಂದು ರಾತ್ರಿ ಎದೆನೋವು ಕಾಣಿಸಿದೆ ಬಳಿಕ ತನ್ನ ಸ್ಕೂಟರ್ನಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮುಂದಾದಗ ಸಾವನ್ನಪ್ಪಿದ್ದಾರೆ.
ವಜ್ರಾಕ್ಷ ಪೂಜಾರಿ ಆರೋಗ್ಯವಾಗಿದ್ದು ದಿನನಿತ್ಯದಂತೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದಾಗ ಎದೆನೋವು ಬಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರು ಪತ್ನಿ ಮತ್ತು ಒಂದು ಪುತ್ರಿಯನ್ನು ಅಗಲಿದ್ದಾರೆ.