ಕಲ್ಲಡ್ಕ ಶಾರದೋತ್ಸವ: ‘ಶಾಂತಶ್ರೀ’ ಪ್ರಶಸ್ತಿಗೆ ವಿಧೂಷಿ ವಿದ್ಯಾ ಮನೋಜ್ ಆಯ್ಕೆ
44 ವರ್ಷ ಶಬರಿಮಲೆ ಯಾತ್ರೆ ಕೈಗೊಂಡ ಶತಾಯುಷಿಗಳಾದ ಕಮಲ ಗುರುಸ್ವಾಮಿ ಕುಂಟಿಪಾಪು ಮತ್ತು ಸ್ವಉದ್ಯಮದಲ್ಲಿ ಸಾದನೆಗೈದ ಸಾದಕಿ ನಾಗರತ್ನ ಪೂರ್ಲಿಪಾಡಿ ಅವರು ‘ಗ್ರಾಮಗೌರವ’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸೆ.28 ರಂದು ಕ್ರೀಡಾಕೂಟ ‘ಮಾರ್ನೆಮಿದ ಗೊಬ್ಬು’ ಶಿಶು, ಬಾಲ, ಪ್ರೌಢ, ತರುಣ, ಸಾರ್ವಜನಿಕ ಎಂಬ ಐದು ವಿಬಾಗಗಳಲ್ಲಿ ಜರಗಲಿದ್ದು, ಸೆ.29 ರಂದು ವೇ.ಮೂ. ಪಳನೀರು ಶ್ರೀಪತಿ ಭಟ್ ಇವರ ಪೌರೋಹಿತ್ಯದಲ್ಲಿ ಶಾರದಾ ಮಾತೆಯ ಪ್ರತಿಷ್ಠಾಪನೆ ನೆರವೇರಲಿದೆ. ದುರ್ಗಾಹೋಮ, ಶಾರದೆಗೆ ರಂಗಪೂಜೆ, ಅಕ್ಷರಭ್ಯಾಸ, ಆಯುಧಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಗಣ್ಯರ ಭಾಗವಹಿಸುವಿಕೆಯಲ್ಲಿ ಧಾರ್ಮಿಕ ಸಭೆ, ಪ್ರಶಸ್ತಿ ಪ್ರಧಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ನೌಕಸೇನೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದನೆ ಮಾಡಲಾಗುವುದು.
ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಟಕ, ನೃತ್ಯರಂಜನಿ, ಗಾನ ನಾಟ್ಯ ಸಂಭ್ರಮ ನಡೆಯಲಿದೆ. ವಿಜಯದಶಮಿಯಂದು ಶೋಭಾಯಾತ್ರೆ ಯೊಂದಿಗೆ ಉತ್ಸವವು ಸಮಾಪನಗೊಳ್ಳಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.