
ಮೂಡುಬಿದಿರೆ: ವಕೀಲ ಬಾಹುಬಲಿ ಪ್ರಸಾದ್ರವರಿಗೆ ಶಾರದಾನುಗ್ರಹ ಪ್ರಶಸ್ತಿ
Sunday, September 21, 2025
ಮೂಡುಬಿದಿರೆ: ಎಂ.ಬಾಹುಬಲಿ ಪ್ರಸಾದ್ ಅವರ ಶಾರದಾನುಗ್ರಹ 20625 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮೂಡುಬಿದಿರೆ ಪೊನ್ನೆಚ್ಚಾರಿ ಲಕ್ಷ್ಮೀ ವೆಂಕಟರಮಣ ದೇವಾಲಯದ ಆನುವಂಶಿಕ ಆಡಳಿತ ಮೊಕ್ತೇಸರ ಅಶೋಕ್ ಕಾಮತ್ ತಿಳಿಸಿದ್ದಾರೆ.
ಸೆ. 30ರಂದು ನಡೆಯುವ ಪೊನ್ನೆಚ್ಚರಿ ಶಾರದಾ ಮಹೋತ್ಸವ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದು ಅವರು ಪತ್ರಿಕೆಗೆ ತಿಳಿಸಿರುತ್ತಾರೆ.
ಬಾಹುಬಲಿ ಪ್ರಸಾದ್ ರವರು ಕಾನೂನು ಸಹಕಾರ ಶೈಕ್ಷಣಿಕ ಸಾಮಾಜಿಕ ರಾಜಕೀಯ ಧಾರ್ಮಿಕ ಕ್ಷೇತ್ರಗಳಲ್ಲಿ ಅನುಪಮಾ ಸೇವೆಯನ್ನು ಸಲ್ಲಿಸಿರುತ್ತಾರೆ. ಇವರ ಬಹುಮುಖ ಸೇವೆಯನ್ನು ಗುರುತಿಸಿ ರಾಷ್ಟ್ರಮಟ್ಟದ ಭಾರತ್ ಸೇವಾ ಪುರಸ್ಕಾರ ನೀಡಿ ಗೌರವಹಿಸಲಾಗಿದೆ.
ಇವರ ಸಹಕಾರ ಕ್ಷೇತ್ರದ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕಲ್ಲಬೆಟ್ಟು ಕರಿಂಜೆ ಮಾರೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಾರದಾನುಗ್ರಹ ಪ್ರಶಸ್ತಿಗೆ ಭಾಜನರಾದ ಬಾಹುಬಲಿ ಪ್ರಸಾದ್ ಅವರಿಗೆ ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಮಕೃಷ್ಣಶಿರೂರು ಅಭಿನಂದನೆ ಸಲ್ಲಿಸಿರುತ್ತಾರೆ