ಡಿ.7 ರಿಂದ 13 ರವರೆಗೆ ತುಳು ತಾಳಮದ್ದಳೆ ಸಪ್ತಾಹ
ಮಂಗಳೂರು: ತುಳುಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ಕೋಡಿಕಲ್ ವತಿಯಿಂದ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹ ಡಿ.7ರಿಂದ 13ರವರೆಗೆ ಪ್ರತಿದಿನ ಸಂಜೆ 5ರಿಂದ ನಗರದ ಕಂಕನಾಡಿ ಗರೋಡಿ ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ನಡೆಯಲಿದೆ.
ನ.7ರಂದು ಗರೋಡಿ ಕ್ಷೇತ್ರ ಅಧ್ಯಕ್ಷ ಚಿತ್ತರಂಜನ್ ಗರೋಡಿ ಸಪ್ತಾಹ ಉದ್ಘಾಟಿಸುವರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ಪೆಲತ್ತಡಿ ಅತಿಥಿಯಾಗಿ ಭಾಗವಹಿಸುವರು. ಡಿ.13ರಂದು ಸಮಾರೋಪ ಸಮಾರಂಭದಲ್ಲಿ ದಾಮೋದರ ನಿಸರ್ಗ ಅವರ ಒಡನಾಡಿ ಜೆ.ವಿ. ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ತುಳುಕೂಟ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ, ಬಿಎಸ್ಎನ್ಎಲ್ ನಿವೃತ್ತ ಅಽಕಾರಿ ನಾರಾಯಣ ಬಿ.ಡಿ. ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ತುಳುಕೂಟ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.7ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇವರಿಂದ ‘ಪಗರಿದ ಸಂಕ’, ಡಿ.8ರಂದು ಶ್ರೀ ವಾಗೀಶ್ವರಿ ಕಲಾವರ್ಧಕ ಯಕ್ಷಗಾನ ಮಂಡಳಿ ರಥಬೀದಿ ಮಂಗಳೂರು ಇವರಿಂದ ‘ತುಳುನಾಡ ಬಲ್ಯೇಂದ್ರೆ’, ಡಿ.9ರಂದು ಯಕ್ಷಕಲಾ ಸುರತ್ಕಲ್ ಇವರಿಂದ ‘ಬೀರೆ ಸುಧನ್ವೆ’, ಡಿ.10ರಂದು ಯಕ್ಷ ಮಂಜುಳಾ ಮಹಿಳಾ ತಾಳಮದ್ದಳೆ ಬಳಗ ಕದ್ರಿ ಇವರಿಂದ ‘ಯಕ್ಷಮಣಿ’, ಡಿ.೧೧ರಂದು ಸರಯೂ ಯಕ್ಷವೃಂದ ಕೋಡಿಕಲ್ ಇವರಿಂದ ‘ಕಾನದ ಕೌಶಿಕೆ’, ಡಿ.12ರಂದು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪಾಂಡೇಶ್ವರ ಇವರಿಂದ ‘ಕೋಟಿ ಚೆನ್ನಯ’ ತಾಳಮದ್ದಳೆ ನಡೆಯಲಿದೆ. ಡಿ.13ರಂದು ಸರಯೂ ಯಕ್ಷ ಬಳಗದವರಿಂದ ‘ಮಾಯಕೊದ ಬಿನ್ನೆದಿ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.
ಪ್ರಮುಖರಾದ ಡಾ. ಹರಿಕೃಷ್ಣ ಪುನರೂರು, ಹೇಮಾ ದಾಮೋದರ ನಿಸರ್ಗ, ಜೆ.ವಿ. ಶೆಟ್ಟಿ, ನಾಗೇಶ್ ದೇವಾಡಿಗ ಕದ್ರಿ, ವಿಜಯಲಕ್ಷ್ಮಿ ಎಲ್.ಎನ್., ನಾರಾಯಣ ಬಿ.ಡಿ. ಉಪಸ್ಥಿತರಿದ್ದರು.