ಚಿಕಿತ್ಸೆಗೆ ತುತಾ೯ಗಿ ಸ್ಪಂದಿಸಿದ ಸಾಯಿ ಮಾನಾ೯ಡ್: 10,000 ರೂ. ನೆರವು
Saturday, January 24, 2026
ಮೂಡುಬಿದಿರೆ: ಸಾಯಿ ಮಾನಾ೯ಡ್ ಸೇವಾ ಸಂಘ ಟ್ರಸ್ಟ್ ಅಮನಬೆಟ್ಟು ಪಡುಮಾನಾ೯ಡು ಇದರ ಸದಸ್ಯರಾದ ದಿನೇಶ್ ಕೋಟ್ಯಾನ್ ಅಳಿಯೂರು ಅವರ ಕಾಲಿನ ತುತು೯ ಚಿಕಿತ್ಸೆಗಾಗಿ ಸೇವಾ ಸಂಘ ದಿಂದ 88ನೇ ತುರ್ತು ಯೋಜನೆಯ 10,000 ರೂ.ವನ್ನು ಬುಧವಾರ ಹಸ್ತಾಂತರಿಸಲಾಯಿತು.
ದಿನೇಶ್ ಅವರು ಡಿ. 30ರಂದು ಮನೆಯಲ್ಲಿ ಬಿದ್ದು ಕಾಲಿಗೆ ಪೆಟ್ಟಾಗಿದ್ದು ಸರ್ಜರಿ ಆಗಿರುತ್ತದೆ. ಅವರಿಗೆ ಇನ್ನೂ 8 ವಾರದ ವಿಶ್ರಾಂತಿ ಬೇಕೆಂದು ವೈದ್ಯರು ತಿಳಿಸಿರುತ್ತಾರೆ.
ವಿಷಯ ತಿಳಿದ ತಕ್ಷಣ ಸೇವಾ ಸಂಘವು ದಿನೇಶ್ ಅವರಿಗೆ ಕರೆ ಮಾಡಿ ಆರೋಗ್ಯವನ್ನು ಅವರನ್ನು ವಿಚಾರಿಸಿ 10000 ರೂಪಾಯಿಯ ಚೆಕ್ಕ್ ಅನ್ನು ಹಸ್ತಾಂತರಿಸಿದೆ.