ಇನ್ಸ್ಟಗ್ರಾಮ್ ನಲ್ಲಿ ಬಾಂಬ್ ಬೆದರಿಕೆ ಮೆಸೇಜ್: ಪ್ರಕರಣ ದಾಖಲು
Monday, March 2, 2026
ಉಳ್ಳಾಲ: ಉಳ್ಳಾಲ ಕ್ಕೆ ಬಾಂಬ್ ಇಡುತ್ತೇನೆ ಎಂದು ಶಂಕರ ಎಂಬ ಹೆಸರಿನಲ್ಲಿ ವ್ಯಕ್ತಿ ಯೊಬ್ಬ ಇನ್ಸ್ಟಗ್ರಾಮ್ ನಲ್ಲಿ ಮೆಸೇಜ್ ವೈರಲ್ ಮಾಡಿದ್ದು ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ಸುಹಾಸ್ ಶೆಟ್ಟಿ ಎಂಬವರ ಇನ್ಸ್ಟಗ್ರಾಮ್ ಪೋಸ್ಟ್ ಗೆ ಶಂಕರ್ 11916 ಬಳೆಕೆದಾರ ವ್ಯಕ್ತಿ 'ಉಳ್ಳಾಲ ದಲ್ಲಿ ಬಾಂಬ್ ಇಡುತ್ತೇನೆ ಎಲ್ಲರೂ ಸಪೋರ್ಟ್ ಮಾಡಿ ' ಎಂದು ಕಾಮೆಂಟ್ ಮಾಡಿದ್ದ.
ಇದನ್ನು ಸಾಮಾಜಿಕ ಜಾಲತಾಣದ ಮೋನಿಟರಿಂಗ್ ನಿರ್ವಹಿಸುತ್ತಿದ್ದ ಸಂತೋಷ್ ದೊಡ್ಡ ಮನಿ ಅವರು ಗಮನಿಸಿದ್ದು, ಅವರು ಈ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಆ ರೋಪಿಯು ಧರ್ಮ ಧರ್ಮಗಳ ಮಧ್ಯೆ ವೈರತ್ವ, ಉಂಟುಮಾಡಿ ಹಿಂಸೆಗೆ ಪ್ರಚೋದಿಸಿ, ಜನರನ್ನು ಎತ್ತು ಕಟ್ಟುವಂತೆ ಮಾಡುವ ಉದ್ದೇಶದಿಂದ ಜಾಲತಾಣದ ಇನ್ಸ್ಟಗ್ರಾಮ್ ನಲ್ಲಿ. ಪ್ರಚೋಧನಾಕಾರಿಯಾಗಿ ಕಾಮೆಂಟ್ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.