SSLC ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಕೆ. ರಕ್ಷಾ ಜಿ.ಎನ್. ಅವರಿಗೆ ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಅಭಿನಂದನೆ
Friday, April 24, 2026
ಮಂಗಳೂರು: SSLC ಪರೀಕ್ಷೆಯಲ್ಲಿ 603 (96.48%) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಬೀದಿಬದಿ ವ್ಯಾಪಾರಿ ಸಮುದಾಯಕ್ಕೆ ಕೀರ್ತಿ ತಂದ ಕೆ. ರಕ್ಷಾ ಜಿ.ಎನ್. ಅವರು ಇಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (CITU) ಕಚೇರಿಗೆ ಭೇಟಿ ನೀಡಿದರು.
ಈ ಸಂಧರ್ಭದಲ್ಲಿ ಸಂಘದ ವತಿಯಿಂದ ಗೌರವ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಪ್ರಮುಖರಾದ ಬಿ.ಕೆ ಇಮ್ತಿಯಾಜ್, ಸುನಿಲ್ ಕುಮಾರ್ ಬಜಾಲ್, ಮುಜಾಫರ್ ಅಹ್ಮದ್, ಸಂತೋಷ್ ಆರ್.ಎಸ್, ಅಬ್ದುಲ್ ಖಾದರ್, ಗಂಗಮ್ಮ, ನೌಶಾದ್ ಕಣ್ಣೂರ್, ಶಿವಪ್ಪ, ಮುತ್ತುರಾಜ್, ದೊರೆಸ್ವಾಮಿ, ಸೆಲ್ವ ರಾಜ್, ಗುಡ್ಡಪ್ಪ, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.