ಕೆ.ಕೆ. ಗಟ್ಟಿಯವರ ನಾಟಕಗಳಲ್ಲಿ ಸಾಮಾಜಿಕ ಮೌಲ್ಯವಿದೆ: ಶರವು ರಾಘವೇಂದ್ರ ಶಾಸ್ತ್ರಿ
ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಾಟಕಕಾರ ಕೆ.ಕೆ. ಗಟ್ಟಿ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಚಾವಡಿ ತಮ್ಮನ ಗೌರವವನ್ನು ಪ್ರಧಾನ ಮಾಡಿ ಅವರು ಮಾತನಾಡಿದರು.
ನನ್ನ ಗುರುಗಳು: ಅರವಿಂದ ಬೋಳಾರ್
ಸಮಾರಂಭದಲ್ಲಿ ಖ್ಯಾತ ನಟ ಅರವಿಂದ ಬೋಳಾರ್ ಮಾತನಾಡಿ, ನಾನು ರಂಗಭೂಮಿಯಲ್ಲಿ ಪ್ರಸಿದ್ಧಿ ಪಡೆಯಲು ಮೂಲ ಕಾರಣ ಶ್ರೀ ಶರವು ಕ್ಷೇತ್ರ ಹಾಗೂ ಶರವು ಕ್ಷೇತ್ರದಲ್ಲಿ ನನ್ನನ್ನು ನಾಟಕರಂಗಕ್ಕೆ ಪರಿಚಯಿಸಿದ ಕೆ.ಕೆ. ಗಟ್ಟಿಯವರು ನನ್ನ ರಂಗಭೂಮಿಯ ಮೊದಲ ಗುರುಗಳು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, 49 ವರ್ಷಗಳ ಹಿಂದೆ ಶ್ರೀ ಸೋಮನಾಥ ಕಲಾ ಭೂಮಿ ರಂಗಸಂಸ್ಥೆಯನ್ನು ಆರಂಭಿಸಿ 50ಕ್ಕೂ ಹೆಚ್ಚು ಹೆಚ್ಚು ನಾಟಕಗಳನ್ನು ಬರೆದು ನಿರ್ದೇಶನ ಮಾಡಿದ ಕೆ.ಕೆ. ಗಟ್ಟಿಯವರ ರಂಗಭೂಮಿ ಸೇವೆ ಅನನ್ಯವಾದದ್ದು ಎಂದು ಬಣ್ಣಿಸಿದರು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ ಭಂಡಾರಿ, ಶ್ರೀ ಸೋಮನಾಥ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ ಗಟ್ಟಿ ಪಿಲಾರ್ ಶುಭಕೋರಿ ಮಾತನಾಡಿದರು.
ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ವಸಂತ ರೈ ಬಿ.ಕೆ. ಅವರು ಸ್ವಾಗತಿಸಿ, ವಂದಿಸಿದರು.