ಕೃಷ್ಣಯ್ಯ ಶೆಟ್ಟಿಗಾರ್ ನಿಧನ
Monday, April 13, 2026
ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ನಿವೃತ್ತ ಪ್ರಥಮ ದರ್ಜೆ ಸಹಾಯಕ (2000-2022) ಕೃಷ್ಣಯ್ಯ ಶೆಟ್ಟಿಗಾರ್ (63) ಇತ್ತೀಚೆಗೆ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು.
ಮೂಲತಃ ಕೋಟೇಶ್ವರದವರಾದ ಮೃತರು ಒಬ್ಬ ಅದ್ವಿತೀಯ ಸ್ನೇಹಪರಜೀವಿ, ಜೊತೆಗೆ ತಮ್ಮ ಸಮಾಜಮುಖಿ ಚಿಂತನೆ ಹಾಗೂ ಸೇವಾ ಮನೋಭಾವದಿಂದ ಗಮನ ಸೆಳೆದಿದ್ದರು.
ಮೃತರು ಪತ್ನಿ, ಪುತ್ರ ಹಾಗೂ ಕುಟುಂಬ ಸದಸ್ಯರು, ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.